Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

Jun 07, 2025

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ. ಜೀವನದ ಉದ್ಧಾರದ ಎಲ್ಲ ಸ್ತರಗಳಲ್ಲೂ ಇದು ಅವಶ್ಯವಾದದ್ದು. ಪುರಂದರರು ಹೇಳುವಾಗ 'ಸಾಧು ಸಜ್ಜನರೊಳಗಿರುವೋದೆ ಹಬ್ಬ' ಎಂದು ಕೊಂಡಾಡಿರುವರು. 

ಸಜ್ಜನರ ಸಂಗ ನೀಡೊ ಸರ್ವಪಾಲಕನೆ*ಮುದ್ದು ಗೋಪಿಯ ಕಂದ ಮುರ್ಜಗದೊಳ್ವಂದ್ಯ**ದುಷ್ಟಜನ ಶಿಕ್ಷಕನೆ ಶಿಷ್ಟರ ಸಂರಕ್ಷಕನೆ**ಇಷ್ಟ ಫಲದಾಯಕ ಇಂದಿರೆಕಾಂತನೆ**ಕಷ್ಟ ದಾರಿದ್ರ್ಯ ಸಂಹಾರ ಭಯ ಛೇದಕನೆ**ಸೃಷ್ಟಿ ಸ್ಥಿತಿಲಯ ಕರ್ತೃ ಯುಧಿಷ್ಠಿರನನುಜನ ಸಖನೆ ll - ಹರಪನಹಳ್ಳಿ ಭೀಮವ್ವ*

ಹರಿದಾಸಿ ಭೀಮವ್ವನವರು 'ಸಜ್ಜನರ ಸಂಗ ನೀಡೊ' ಎಂದು ಕೇಳಿದರೆ, ಶ್ರೀವ್ಯಾಸರಾಜರು ಎಂತಹ ಸಜ್ಜನರ ಸಂಗ ಎಂಬುದನ್ನು -

ಅಚ್ಯುತಾಂಘ್ರಿ ನಿಷ್ಠರ ಯಾದೃಚ್ಛ ಲಾಭ ತುಷ್ಟರ l*ನಿಶ್ಚಯಾತ್ಮ ಜ್ಞಾನವುಳ್ಳ ಅಚ್ಚ ಭಾಗವತರ ll* ಸಂಗವಿರಲೆಂದರು.

ಭಾಗವತರೆ ಭಗವಂತನ ಮಹಾತ್ಮ್ಯಜ್ಞಾನ ತಿಳಿಸಿ ಅವನ ದರುಶನದ ಪಥ ತೋರುವರು. ಅವರಲ್ಲಿ ಪ್ರಥಮರಾಗಿ ಶ್ರೀಹರಿಯ ಪ್ರತಿಬಿಂಬರೆನಿಸಿಕೊಂಡವರು ಶ್ರೀಮದಾನಂದತೀರ್ಥರು. ನಂತರ ಆ ಪರಂಪರೆಯಲ್ಲಿ ಬಂದ ವಿಭೂತಿ ಪುರುಷರು, ದಾಸವರೇಣ್ಯರು-

ಹರಿದಾಸರ ಸಂಗದಿಂದ*ಹರಿ ನಿನ್ನ ಸಂಗವಾಯಿತೊ ಎನಗೆ**ತಂದೆ ಮುದ್ದುಮೋಹನವಿಟ್ಠಲ ll - ತಂದೆಮುದ್ದುಮೋಹನದಾಸರು*

ಹರಿದಾಸರ ಸಂಗದಿಂದ ಲಾಭ (ಫಲ) ವನ್ನು ಪುರಂದರದಾಸರು ನಿರೂಪಿಸಿದ್ದು ಹೀಗೆ -

ಹರಿಶರಣರೆನ್ನ ಮನೆಯ ಮೆಟ್ಟಲು ಮನೆ ಪಾವನ್ನವಾಯಿತು*ಹರಿ ಶರಣರೆನ್ನ ಕೂಡೆ ಮಾತನಾಡಲು ತನು ಪಾವನವಾಯಿತು**ಹರಿಶರಣರೆನ್ನ ಮನೆಗೆ ಬಂದರೆ ಯೆನ್ನ ಇಪ್ಪತ್ತೊಂದು ಕುಲ ಪಾವನ್ನವಾಯಿತು**ಹರಿಶರಣರೆನಗೆ ಗತಿ ಹರಿಶರಣರೆನಗೆ ದಿಶೆ**ಪುರಂದರವಿಟ್ಠಲ ಗದುಗಿನ ವೀರನಾರಾಯಣ ll - ಶ್ರೀಪುರಂದರದಾಸರು*

ದಿನಗಳನು ಕಳೆವ ಜನರೇ ಸುಜನರು l*ವನಜನಾಭನ ದಾಸಜನ ಸಮಾಗಮದಿಂದ ll - ಶ್ರೀವಾದಿರಾಜರು*

               ಮಣ್ಣುತೂರಿ ತೂರಿ ಧಾನ್ಯ ಆರಿಸಿದಂತೆ l - ಶ್ರೀವಿ.

ಕರುಣಾಮಯಿ ಶ್ರೀಹರಿ

ಏನು ಕರುಣಾನಿ ಧಿಯೊ ಹರಿ ಮ-*ತ್ತೇನು ಭಕ್ತಾಧೀನನೋ ಇ -**ನ್ನೇನು ಈತನ ಲೀಲೆ ಇಚ್ಛಾ ಮಾತ್ರದಲಿ ಜಗವ l**ತಾನೆ ಸೃಜಿಸುವ ಪಾಲಿಸುವ ನಿ-**ರ್ವಾಣ ಮೊದಲಾದಖಿಳ ಲೋಕ-**ಸ್ಥಾನದಲಿ ಮತ್ತವರನಿಟ್ಟಾನಂದಪಡಿಸುವನು ll - ಶ್ರೀಜಗನ್ನಾಥದಾಸರು*

ಶ್ರೀಮದಾಚಾರ್ಯರು ಭಗವಂತನನ್ನು ಕರುಣಾಪೂರ್ಣ ವರಪ್ರದ ಚರಿತ' ಎಂದರು.

ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ ಕುಳಿತು ಪಾಡಲು*ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ l**ಸುಲಭನೋ ಹರಿ ತನ್ನವರನರಘಳಿಗೆ ಬಿಟ್ಟಗಲನು ರಮಾಧವ-**ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ll - ಶ್ರೀಜಗನ್ನಾಥದಾಸರು*

 ದಾಸರು ಅವನ ಕಾರುಣ್ಯವನ್ನು ಹೇಳುವಾಗ 'ಒಡಲ ನೆಳಲಂದದಲಿ', 'ಕಣ್ಣಿಗೆವೆಯಂದದಲಿ', 'ಹಿಂದೆ ಮುಂದೆಡಬಲದಿ ಒಳಹೊರಗಿಂದಿರೇಶನು ತನ್ನವರನೆಂದೆಂದು ಸಲಹುವ' ಹೀಗೆಂದು ಬಣ್ಣಿಸಿ ಭಗವಂತನ ಅಪರಿಮಿತ ಕಾರುಣ್ಯವನ್ನು ನಮಗಾಗಿ ತಿಳಿಸಿಕೊಟ್ಟರು. 

ಸಕಲ ಸಾಧನಕೆಲ್ಲ ಸಿದ್ಧಿಗೊಳಿಸುವುದು*ಭಕುತಿ ಕಾರಣವಲ್ಲದೆ ಬೇರೆ ಸಾಧನವುಂಟೆ ll ಪ ll*

ಮುಕುತಿ ಜನರೆಲ್ಲ ಕೇಳಿ ಇತರ ಸಾಧನಕೆಲ್ಲ*ಭಕುತಿಗಭಿಮಾನಿ ಭಾರತೀದೇವಿಯರ ಕರುಣ**ಮುಕುತಿ ಸಾಧನವೆಂದು ಮನದಿ ಭಜಿಸಿ**ಅಖಿಲೇಶ ಪುರಂದರವಿಟ್ಠಲ ತಾನೊಲಿವ ll*

ಭಾರತೀದೇವಿಯ ನೆನೆ ನೆನೆ*ನಿರುತ ಭಕುತಿಗಿದು ಮನೆ ಮನೆ ll* ಎಂದಿರುವರು. ಇಷ್ಟಲ್ಲದೆ,

'ಅಕ್ಷಯದಿಂದಲಿ ಕೊಟ್ಟ ಭಕುತಿಯ ರಕ್ಷಿಸೆನ್ನನು ಅನುದಿನ' ಎಂದು ಬೇಡುವರು.

ಸಾಧಕರು ಮಾಡುವ ಭಕುತಿಗೆ ಅಭಿಮಾನಿಯಾದ ಭಾರತೀದೇವಿಯನ್ನು ಮನುದುಂಬಿ ಪಾಡಿ ಪೊಗಳಿದ್ದು ಹೀಗಿದೆ.

ಭಕುತಿಗಭಿಮಾನಿ ಭಾರತೀದೇವಿಯರ ಕರುಣ*ಮುಕುತಿ ಸಾಧನವೆಂದು ಮನದಿ ಭಜಿಸಿ**ಅಖಿಲೇಶ ಪುರಂದರವಿಟ್ಠಲ ತಾನೊಲಿವ ll* - ಶ್ರೀಪುರಂದರದಾಸರು₹ಮಹಾಭಾರತದಲ್ಲಿ ಕೃಷ್ಣಭೀಮರ ನಂತರದ ಸ್ಥಾನವನ್ನು ದ್ರೌಪದಿಯಾಗಿ ಭಾರತಿಯು ಅವತರಿಸಿ ಭೂಭಾರಹರಣಕ್ಕೆ ಕಾರಣರಾದರು. ಶ್ರೀಮದಾಚಾರ್ಯರ ಗ್ರಂಥಕ್ಕೆ ಟೀಕೆ ಬರೆದ ಶ್ರೀಜಯತೀರ್ಥರು ,*'ಭವತಿಯದನುಭಾವಾದೇಡಮೂಕೋಪಿವಾಗ್ಮೀ ....' ಎಂದು ಪ್ರಾರ್ಥಿಸಿದ್ದನ್ನು ಕಾಣುತ್ತೇವೆ.

                     ತನ್ನ ಕಾರ್ಯಕ್ಕಾಗಿ ಪರರ ಕೆಡೆಸುವರ ಸಂಗ ಬೇಡ l - ಶ್ರೀಪು.

            

ರಾಗ - ದೇಶ : ತಾಳ - ಏಕತಾಳ

ಬಂದ್ಯಾ ವಿಟ್ಠಲ ಆನಂದವಾಯಿತು ನಂದಕಂದ ಗೋವಿಂದ ಮುಕುಂದಾ ll ಪ ll




ಹಿಂದಿನ ಹಿರಿಯರ ಪುಣ್ಯ ಫಲಿಸಿತುಮುಂದಿನವರಿಗೆ ಅಭ್ಯುದವಾಯಿತು ತಂದೆ ತಾಯಿ ಬಂಧು ಬಳಗವು ನೀನೇಪುಂಡರೀಕ ವರದ ಪಂಢರಿರಾಯಾ ll 1 ll

ಪತಿತಃ ಪಾವನ ಪಾದ ಶತಕೋಟಿ ರವಿತೇಜ ಟೊಂಕದ ಮೇಲೆ ಕೈಯಿಟ್ಟು ಇಟ್ಟಿಗೆ ಮೇಲೆ ನಿಂತಾಸತ್ಯ ಸಂಕಲ್ಪ ನೀ ನಿತ್ಯ ತೃಪ್ತನು ನಿನ್ನಭಕ್ತ ವಾತ್ಸಲ್ಯಕ್ಕೆ ಮಿತಿಯಿಲ್ಲವಯ್ಯಾ ll 2 ll

ಇನ್ನು ಎನ್ನಯ ಬಂಧವು ತೀರಿತುಮುನ್ನ ಬರುವ ಕ್ಲೇಶವು ದೂರಾಯಿತುಧನ್ಯನಾದೆ ನರಜನ್ಮ ಸಾರ್ಥಕವಾಯ್ತು ಪ್ರಸನ್ನ ಭೂಪತಿವಿಟ್ಠಲ ರುಕ್ಮಿಣಿ ರಮಣಾ ll 3 ll

ರಾಗ - : ತಾಳ -

ನಿನ್ನ ನೋಡಿ ಧನ್ಯನಾದೆನೋ lಶ್ರೀ ವೇದವ್ಯಾಸ ನಿನ್ನ ನೋಡಿ ಧನ್ಯನಾದೆನೋ ll ಪ ll

ನಿನ್ನ ನೋಡಿ ಧನ್ಯನಾದೆ l ಯಜ್ಞಕುಂಡ ದೇಶದಲ್ಲಿ lಘನ್ನ ಮಹಿಮ ಪೂರ್ಣ ಸಂ- lಪನ್ನ ಮೂರುತಿ ಬಾದರಾಯಣ ll ಅ ಪ ll

ಯಾದವಾರ್ಯ ಮೌನಿಶಿಲ್ಪಿ l ಶ್ರೀದ ನಿನ್ನ ನವ ಸುಮೂರ್ತಿ lಮೋದದಿಂದ ರಚಿಸಿ ತಿದ್ದಿ l ಪಾದ ಭಜಿಸಿ ಅರ್ಚಿಸಿರುವ ll 1 ll

ನವ ಸುಮೂರ್ತಿಗಳಲಿ ನಿನ್ನ lನವ ಸುಭಕ್ತಿಗಳನು ಬೇಡೆ llನವ ಸುಮಹಿಮೆ ತೋರೆ ಕರಗ l ಳವಲಂಬನದಿ ದಯವ ತೋರ್ದ ll 2 ll

ಅಷ್ಟು ಮೂರ್ತಿಗಳಲಿ ತಮ್ಮ lಇಷ್ಟ ಮೂರ್ತಿಯನ್ನೆ ಇರಿಸಿ ll ಅಷ್ಟದಿಗಿಭದಂತೆ ಮೆರೆದ lಅಷ್ಟ ಶಿಷ್ಟರಿಗಿತ್ತ ಮುನಿಯು ll 3 ll

ಗುರ್ಜುರೀ ಬಂಕಾಪುರ l ಪುಮರ್ಜಿ ಕಾಡಣೀಯು llಘರ್ಜಿಪ ಉದ್ಗಾವಿ ಕಲ್ಲಾಪುರ | ನಿರ್ಜರ ಅಂಘೇರಿ ಮಣೂರ ll 4 ll

ತರ್ಕ ಮುದ್ರ ಅಭಯ ಹಸ್ತ l ಅರ್ಕಾನಂತ ಭಾಸ ಗಾತ್ರ llಶರ್ಕರಾಕ್ಷ ಮುಖರ ವಿನುತ lವಕ್ರ ಮನದ ಜನಕ ಅಮಿತ್ರ ll 5 ll

ಯೋಗ ಪಟ್ಟಕ ವಸನ ಚೆಲ್ವ l ಯೋಗದಾಸನ ಕೂರ್ಮದುಪರಿ ll|ನಾಗನಂತೆ ಪೋಲ್ವ ಜಟಾ l ಸೋಗಿನಿಂದ ಮೆರೆವ ದೇವ ll 6 ll

ಯಜ್ಞ ಕುಂಡ ಕ್ಷೇತ್ರ ಮೂರ್ತಿ lಯಜ್ಞ ಭೋಕ್ತ ತ್ರಯ ಸುಮೂರ್ತಿ llಯಜ್ಞ ಗುರು ಗೋವಿಂದ ವಿಠಲ l ಭಗ್ನ ಗೈಸೊ ಮಾಯ ಪಟಲ ll 7 ll

'ಚಂಚಲೋಯಂ ಮನೋ ಮೀನೋ' ಎಂದಂತೆ ಮನಸ್ಸು ಮೀನಿನಂತೆ ಬಲು ಚಂಚಲ. ಎಲೆ ಮನವೆ ಹರಿಧ್ಯಾನ ಮಾಡು ll ಪ ll

ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು*ಎಲೆ ಮನವೆ ಮುರವೈರಿಯಂಘ್ರಿಯಂಗಳ ಭಜಿಸು**ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ**ಎಲೆ ಕರ್ಣಂಗಳಿರ ಅಚ್ಯುತನ ಕಥೆ ಕೇಳಿ ll 1 ll*

ಎಲೆ ನೇತ್ರಗಳಿರ ಶ್ರೀಕೃಷ್ಣಮೂರ್ತಿಯ ನೋಡಿ*ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ**ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ**ತುಳಸಿ ಪರಿಮಳವನಾಘ್ರಾಣಿಸು ಅನುದಿನ ll 2 ll*

ಎಲೆ ಶಿರವೆ ನೀ ಕೇಳಧೋಕ್ಷಜನ ಸಿರಿಚರಣ*ಜಲರುಹದೊಳಳಿಯಂತೆ ಬಿಡದೆ ಓಲ್ಯಾಡು**ಎಲೆ ತನುವೆ ನೀನು ಶ್ರೀಪುರಂದರವಿಟ್ಠಲನ**ಸಲೆ ಭಕುತಿ ಜನರ ಸಂಗತಿಯಲ್ಲಿ ಬಾಳು ll 3 ll - ಶ್ರೀಪುರಂದರದಾಸರು*

#viral #trending # Breaking #news #Chethana #Muniswamygowda #Riya #YOGI#https://www.facebook.com/forpublicsforpublics


custom banner
pressmailtoday
Chethana Muniswamygo

Creator

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ. ಜೀವನದ ಉದ್ಧಾರದ ಎಲ್ಲ ಸ್ತರಗಳಲ್ಲೂ ಇದು ಅವಶ್ಯವಾದದ್ದು. ಪುರಂದರರು ಹೇಳುವಾಗ 'ಸಾಧು ಸಜ್ಜನರೊಳಗಿರುವೋದೆ ಹಬ್ಬ' ಎಂದು ಕೊಂಡಾಡಿರುವರು.

ಸಜ್ಜನರ ಸಂಗ ನೀಡೊ ಸರ್ವಪಾಲಕನೆ*ಮುದ್ದು ಗೋಪಿಯ ಕಂದ ಮುರ್ಜಗದೊಳ್ವಂದ್ಯ**ದುಷ್ಟಜನ ಶಿಕ್ಷಕನೆ ಶಿಷ್ಟರ ಸಂರಕ್ಷಕನೆ**ಇಷ್ಟ ಫಲದಾಯಕ ಇಂದಿರೆಕಾಂತನೆ**ಕಷ್ಟ ದಾರಿದ್ರ್ಯ ಸಂಹಾರ ಭಯ ಛೇದಕನೆ**ಸೃಷ್ಟಿ ಸ್ಥಿತಿಲಯ ಕರ್ತೃ ಯುಧಿಷ್ಠಿರನನುಜನ ಸಖನೆ ll - ಹರಪನಹಳ್ಳಿ ಭೀಮವ್ವ*

ಹರಿದಾಸಿ ಭೀಮವ್ವನವರು 'ಸಜ್ಜನರ ಸಂಗ ನೀಡೊ' ಎಂದು ಕೇಳಿದರೆ, ಶ್ರೀವ್ಯಾಸರಾಜರು ಎಂತಹ ಸಜ್ಜನರ ಸಂಗ ಎಂಬುದನ್ನು -

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

476 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

ಸಂಗವಾಗಲಿ ಸಾಧು ಸಂಗವಾಗಲಿ'* ಇದು ಎಲ್ಲ ಸಜ್ಜನರೂ ಬೇಡುವ ಬೇಡಿಕೆ ದೇವರಲ್ಲಿ.

29 views 0 likes 0 comments


Style
More
Like
List
Comment

Prev
Next

Full
Exit
0
0
Prev
Next