Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

*ಪ್ರಾಚೀನ ಶೃಂಗ ಋಷಿ ದೇವಾಲಯ*- ರೇತಸ್ಸನ್ನು ಸೇವಿಸಿ ಗರ್ಭಧರಿಸಿದ ಜಿಂಕೆ*

*ಪ್ರಾಚೀನ ಶೃಂಗ ಋಷಿ ದೇವಾಲಯ*- ರೇತಸ್ಸನ್ನು ಸೇವಿಸಿ ಗರ್ಭಧರಿಸಿದ ಜಿಂಕೆ*

May 05, 2025

*ಪ್ರಾಚೀನ ಶೃಂಗ ಋಷಿ ದೇವಾಲಯ*- ರೇತಸ್ಸನ್ನು ಸೇವಿಸಿ ಗರ್ಭಧರಿಸಿದ ಜಿಂಕೆ*

ಶೃಂಗೇರಿಯನ್ನು ಶೃಂಗಗಿರಿ ಎಂದೂ ಕರೆಯುತ್ತಾರೆ (ಸಂಸ್ಕೃತ: ಋಷ್ಯಶೃಂಗರು ನೆಲೆಸಿದ್ದ ಬೆಟ್ಟಗಳ ಹೊಂದಿರುವ ಪ್ರದೇಶ). ಋಷಿ ಶೃಂಗರೊಂದಿಗೆ ವಿಲೀನಗೊಂಡ ಶಿವಲಿಂಗವನ್ನು ಇಂದು ಕಿಗ್ಗಾದಲ್ಲಿನ ದೇವಾಲಯದಲ್ಲಿ ಕಾಣಬಹುದು. 

ಕಶ್ಯಪ ಬ್ರಹ್ಮನ ಸುಕುಮಾರ ವಿಭಾಂಡಕರು ತಂದೆಯ ಸಲಹೆಯಂತೆ  ಪರಮೇಶ್ವರನ ವರದಾನಕ್ಕಾಗಿ ಸಾವಿರಾರು ವರ್ಷಗಳ ಕಾಲ ತಪಸನ್ನು ಮಾಡುತ್ತಾರೆ. ಘೋರ ತಪಸ್ಸ್ಸಿನ ಪರಿಣಾಮವಾಗಿ ಅವರ ಶಿರದಿಂದ ಭುಗಿಲೆದ್ದ  ತಪೋ ಜ್ವಾಲೆಯು  ಇಡೀ ಪ್ರಚಾರವನ್ನೇ ವ್ಯಾಪಿಸುತ್ತದೆ. ಈ ಜ್ವಾಲೆಯನ್ನು ನಿಯಂತ್ರಿಸಲು ದೇವತೆಗಳು  ಅಪ್ಸರೆಯರನ್ನು ಕಳಿಸುತ್ತಾರೆ.

#ವೈಭವ #ಅಯೋಧ್ಯೆ #ದಶರಥ #ಮಹಾರಾಜ  #ಪುತ್ರಸಂತಾನ #ದೊಡ್ಡಕೊರತೆ  #ಮನಸ್ಸು #ಋಷ್ಯಶೃಂಗ #ಮಹಾಮಹಿಮೆ #ಮಹಾಮಂತ್ರಿ #ಸುಮಂತ್ರ  #ಖುಷಿಪುತ್ರ   #ಪುತ್ರಕಾಮೇಷ್ಟಿ #ಯಾಗ
#childrenphoto #pennsylvania #born #borneo #deerhunting #deer #deervalley #sage #sagesse #kigga #tarikere #tunga #tungariver #malenadu 

ಅವರು ವಿಭಾಂಡಕರು ತಪಸ್ಸು   ಮಾಡುತ್ತಿದ್ದ ಸ್ಥಳದ  ಪದಿಯ ತಟದಲ್ಲೇ ಅಲೆಯುತ್ತಿರುತ್ತಾರೆ. ಹೀಗಿರುವಲ್ಲಿ ಒಂದು ದಿನ ವಿಭಾಂಡಕರು ತುಂಗಾ ನದಿಗೆ ಸ್ನಾನಕ್ಕೆ ಬಂದಾಗ ಅಪ್ಸರೆಯರು ಜಲಕ್ರೀಡೆ ಆಡುವ ನೆಪದಲ್ಲಿ ಮಹರ್ಷಿಗಳ ಚಿತ್ತ ಚಾಂಚಲ್ಯಗೊಳಿಸುವ ಪ್ರಯತ್ನ ಮಾಡುತ್ತಾರೆ. 
ದೈವ ನಿಯಮವೋ ಏನೋ ವಿಭಾಂಡಕರು ಕ್ಷಣಕಾಲ ವಿಚಲಿತರಾಗುತ್ತಾರೆ, ಆಕ್ಷಣಿಕ ಚಂಚಲತೆಯ ಪರಿಣಾಮ -ಕಾಮವಾಗಿ  ಸ್ವಲನಗೊಂಡ ರೇತಸ್ಸು ನದಿಯಲ್ಲಿ ಬಿಡಲ್ಪಡುತ್ತದೆ, ದೇವತೆಗಳ ಸದಿಚ್ಛೆಯಂತೆ ಅಪ್ಸರೆಯರ ಪ್ರಯತ್ನ ಫಲಿಸಿದಂತಾಗಿ ಅವರೆಲ್ಲಾ ಭೂಲೋಕದಿಂದ ನಿರ್ಗಮಿಸುತ್ತಾರೆ.

 ಈ ನಡುವೆ ಶಾಪಗ್ರಸ್ಥ ಜಿಂಕೆ ಯೊಂದು ನದಿಯ ನೀರನ್ನು ಕುಡಿಯಲು ಬಂದು ನೀರಿನೊಂದಿಗೆ ಬೆರೆಸಿದ್ದ ವಿಭಾಂಡಕರ ರೇತಸ್ಸನ್ನು ಸೇವಿಸುತ್ತದೆ. ಸತ್ಪರಿಣಾಮವಾಗಿ ಗರ್ಭಧರಿಸಿದ ಜಿಂಕೆಯು ನವಮಾಸ ಕಳೆದು ಒಂದು ದಿನ ಪ್ರಾತಃಕಾಲ ಶುಭಮುಹೂರ್ತದಲ್ಲಿ ಅ ತೀರದ ಪೊದೆಯೊಂದರಲ್ಲಿ ಗಂಡು ಮಗುವಿಗೆ ಜನ್ಮನೀಡುತ್ತದೆ. 

ದಿವ್ಯ ತೆಜಸ್ಸಿನ ಮಗುವಿಗೆ ಪ್ರಾಥಮಿಕ ಅರೈಕೆ ನೀಡಿದ ತಾಯಿ ಜಿಂಕೆಯು,  ತನ್ನ ಪ್ರಾಣಿ  ಸಹಜಗುಣಕ್ಕನುಗುಣವಾಗಿ ಮಗುವನ್ನು ಅಲ್ಲಿಯೇ ಬಿಟ್ಟು ತೆರಳುತ್ತದೆ. ಎಂದಿನಂತೆ ಸ್ನಾನಕ್ಕೆ ಬಂದ ವಿಭಾಂಡಕರಿಗೆ ಶಿಶುವೊಂದರ ರೋದನ ಕೇಳಿಸಿ.. ಅ ಕಡೆ ತೆರಳಿ ನೋಡಿದಾಗ ಗಂಡು ಮಗುವೊಂದು ಅಶ್ರಯದಾತರಿಲ್ಲದೇ ಅಳುತ್ತಿರುವುದು ಗೋಚರಿಸುತ್ತದೆ. ತಮ್ಮ ತ್ರಿಕಾಲ ಜ್ಞಾನದ ಶಕ್ತಿಯಿಂದ ಮನುವಿನ ವೃತ್ತಾಂತವನ್ನು ಗ್ರಹಿಸಿದವರಾಗಿ ಅದು ತಮ್ಮ  ಕುಡಿಯೆಂದು ಅರಿತು ಮಗುವನ್ನು ಕೊಂಡೊಯ್ದು ಸಲಹುತ್ತಾರೆ.

 ಜಿಂಕೆಯ ಗರ್ಭದಲ್ಲಿ ಜನನವ ಕುರುಹಾಗಿ ತಲೆಯಲ್ಲಿ ಚಿಕ್ಕ ಕೊಂಬು ಮೂಡಿತ್ತು. ( ಸಂಸ್ಕೃತದಲ್ಲಿ ಶೃಂಗ ಎನ್ನುತ್ತಾರೆ) ಅದರೊಂದಿಗೆ ಋಷಿ ಮೂಲದ ಶಿಶುವಾಗಿದ್ದರಿಂದ ವಿಭಾಂಡಕರು ಆ ಮಗುವಿಗೆ ಋಷ್ಯಶೃಂಗನೆಂದು ನಾಮಕರಣ ಮಾಡಿ, ಚೌಲಾದಿ ಉಪನಯನದ ಸಂಸ್ಕಾರಗಳನ್ನು ನೀಡುತ್ತಾರೆ. ಅಷ್ಟೇ ಅಲ್ಲದೇ ತನ್ನಂತೆ ಈ ಬಾಲಕನು ಸ್ತ್ರೀ ಶಕ್ತಿಗೆ ವಶನಾಗಬಾರದೆಂಬ ಉದ್ದೇಶದಿಂದ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ.

 ಹೀಗಿರುವಲ್ಲಿ ಆತ್ತ ಅಯೋಧ್ಯಾಧಿಪತಿ ದಶರಥ ಮಹಾರಾಜನು ತನ್ನ ಉಪಪತ್ನಿಗೆ ಕೆಟ್ಟ ನಕ್ಷತ್ರದಲ್ಲಿ ಜನಿಸಿದ ಮಗಳು  ಶಾಂತಳನ್ನು ಅಂಗ ದೇಶದ ದೊರೆ ರೋಮಪಾದನಿಗೆ ದತ್ತುನೀಡಿರುತ್ತಾನೆ.

 ಶಾಂತಾಳ ಜನ್ಮ ನಕ್ಷತ್ರದ ಕೆಟ್ಟ ಪರಿಣಾಮದಿಂದ ಅಂಗ ದೇಶದಲ್ಲಿ ಭೀಕರ ಕ್ಷಾಮ ತಲೆದೋರುತ್ತದೆ. ಯಾವುದೇ ಯಜ್ಞ ಯಾಗ ಪ್ರಾರ್ಥನೆ ಪೂಜೆಗಳೂ ಫಲ ನೀಡದೆ 13 ವರ್ಷಗಳ ಸುದೀರ್ಘ ಕಾಲದ ಭೀಕರ ಕ್ಷಾಮವು ತನ್ನ ರೌದ್ರ ನರ್ತನವನ್ನು ಮುಂದುವರಿಸುತ್ತದೆ. ಎಲ್ಲೆಂದರಲ್ಲಿ ಸಾವು, ನೋವು, ಆಕಾಂತಿ, ಅರಾಜಕತೆ, ಹಸಿವು ಮುಂತಾದವುಗಳ  ಕೂಗು ಮುಗಿಲು ಮುಟ್ಟುತ್ತದೆ.

 ಇಂತಹ ಸಂಕಷ್ಟದ ಕಾಲದಲ್ಲಿ ತ್ರಿಲೋಕ ಸಂಚಾರಿ ನಾರದ ಮುನಿಗಳು ಅಂಗದೇಶಕ್ಕೆ ಆಗಮಿಸುತ್ತಾರೆ. ಕ್ಷಾಮದಿಂದ ಕಂಗೆಟ್ಟಿದ್ದ ರೋಮಪಾದನು ನಾರದರಿಗೆ ಅರ್ಥಪಾದ್ಯಾದಿಗಳಿಂದ ಸ್ವಾಗತಿಸಿ ಕ್ಷಾಮ ನಿವಾರಣೆಯ ಸಲಹೆ ಪಡೆಯುತ್ತಾನೆ. ಋಷ್ಯಶೃಂಗರ ಪಾದಸ್ಪರ್ಶದಿಂದ  ಈ ದೇಶವು ಪಾವನಗೊಳ್ಳುವುದೆಂಬ ನಾರದರ ಸಲಹೆಯಂತೆ ರಾಜ್ಯದ ಗಣಿಕ ಸ್ತ್ರೀಯರನ್ನು ಶೃಂಗಗಿರಿಯ ವಿಭಾಂಡಕಾಶ್ರಮಕ್ಕೆ ಕಳುಹಿಸುತ್ತಾನೆ ವಿಭಾಂಡಕರಿಲ್ಲದ ಸಮಯವನ್ನು ಸಾಧಿಸಿ,  ಮೋಸದಿಂದ ಮರುಳುಗೊಳಿಸಿದ ಗಣಿಕ ಸ್ತ್ರೀಯರು ಈ ಮಹಾಮಹಿಮನನ್ನು ಅಂಗ ದೇಶದತ್ತ ಕರೆದೊಯ್ಯುತ್ತಾರೆ.

 ಪುಣ್ಯವಂತ ಶ್ರೀ ಋಷಿ ಶೃಂಗರ ಪಾದಸ್ಪರ್ಶವಾಗುತ್ತಿದ್ದಂತೆಯೇ ಅಂಗಿ  ದೇಶದಲ್ಲಿ ಮಳೆಬೆಳೆ ಸಮೃದ್ಧಿಗೊಂಡು ಕಾಮವು ದೇಶದಿಂದ ದೂರವಾಗುತ್ತದೆ. ಋಷ್ಯಶೃಂಗರ ಪ್ರವೇಶದಿಂದ ದೇಶವು ಪಾವನಗೊಳ್ಳುತ್ತದೆ. ಈ ನಾರದರು ಈ ಹಿಂದೆ ನೀಡಿದ ಸಲಹೆಯ ಹಿನ್ನೆಲೆಯಲ್ಲಿ ರೋಮಪಾದನು ತನ್ನ ದತ್ತು ಪುತ್ರಿ ಶಾಂತಳನ್ನು ಋಷ್ಯಶೃಂಗರಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಅಷ್ಟೇ ಅಲ್ಲದೇ ಅಂಗ ದೇಶದಲ್ಲಿ  ಪಟ್ಭಾಭಿಷೇಕವೂ ನೆರವೇರುತ್ತದೆ. ಅಂದಿನಿಂದ ಅಂಗ ದೇಶದ ರಾಜ್ಯಭಾರ ಋಷ್ಯಶೃಂಗರಿಗೆ ಪ್ರಾಪ್ತವಾಗುತ್ತದೆ. ಹೀಗೆ ಋಷ್ಯಶೃಂಗರ ಮಾಂತ್ರಿಕ ಸ್ವರ್ಣದ ಶಕ್ತಿಯಿಂದ ದೇಶಸುಭಿಕ್ಷವಾಗುತ್ತದೆ.


ಇದೇ ಕಾಲದಲ್ಲಿ ಸಕಲ ವೈಭವದಿಂದ ಅಯೋಧ್ಯೆಯನ್ನು ದಶರಥ ಮಹಾರಾಜನು ಆಳುತ್ತಿರುತ್ತಾನೆ  ಪುತ್ರ ಸಂತಾನ ಲಾಭವಿಲ್ಲದ * ದೊಡ್ಡ ಕೊರತೆಯು ಆತನ ಮನಸ್ಸನ್ನು ಕೊರೆಯುತ್ತಿರುತ್ತದೆ. ಋಷ್ಯಶೃಂಗರ ಮಹಾಮಹಿಮೆಯನ್ನು ಅರಿತಿದ್ದ ಮಹಾಮಂತ್ರಿ ಸುಮಂತ್ರನ ಸೂಕ್ತ ಸಲಹೆಯಂತೆ ದಶರಥ ಮಹಾರಾಜನು ಈ ಮಹಾಮಹಿಮ ಖುಷಿಪುತ್ರನನ್ನು ತನ್ನ ದೇಶಕ್ಕೆ ಕರೆಯಿಸಿ ಅದರಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸುತ್ತಾರೆ.

 ಯಾಗಾಗ್ನಿಯಿಂದ ಪ್ರಾಪ್ತವಾದ ಪಾಯಸವನ್ನು ದಶರಥನು ಕೌಸಲ್ಯೆಗೂ, ಕೈಕೆಳಿಗೂ ನೀಡುತ್ತಾನೆ.  ಇವರಿಬ್ಬರೂ ತಮಗೆ ಲಭ್ಯವಾದ ಪಾಯಸದಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ನೀಡಿ, ಸೇವಿಸುತ್ತಾರೆ, ಇದರ ಪರಿಣಾಮವಾಗಿ ಕೌಸಲೈಗೆ ರಾಮ, ಕೈಗೆ ಭರತ ಹಾಗೂ ಸುಮಿತ್ರೆಗೆ ಲಕ್ಷಣ, ಮತ್ತು  ಶತುರಘ್ನ
ಜನನವಾಗಿ ಕಲ್ಯಾಣಕ್ಕೆ ನಾಂದಿಯಾಗುತ್ತದೆ. 

ಕೆಲಕಾಲ ದೇಶವನ್ನಾಳಿದ ನಂತರ ಋಷ್ಯಶೃಂಗರು ತಪಸ್ಸನ್ನು ಆಚರಿಸುವ ಹಂಬಲದಿಂದ ಪತ್ನಿ ಶಾಂತಾಸಮೇತರಾಗಿ  ಮರಳುತ್ತಾರೆ. ಇತ್ತ ತಂದೆ ವಿಭಾಂಡಕ ಮಹರ್ಷಿಗಳು ಪರಮೇಶ್ವರನಲ್ಲಿ ಐಕ್ಯಗೊಂಡ ವಿಷಯ ತಿಳಿದ ಋಷ್ಯಶೃಂಗರು ತಮ್ಮ ಕಿವಿಗೆ ಕೇಳಿಬಂದ ದೇವವಾಣಿಯ ಆದೇಶದಂತೆ ಸಹ್ಯಾದ್ರಿ ಪರ್ವತ - ಶ್ರೇಣಿಯ ಪಶ್ಚಿಮದಿಕ್ಕಿನಲ್ಲಿ ಬರುವ ನರಸಿಂಹ ಪರ್ವತದಲ್ಲಿ ತಪಸ್ಸನ್ನು ಪ್ರಾರಂಭಿಸುತ್ತಾರೆ.

 ಅವರ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷರಾದ ನರಸಿಂಹ ದೇವರು  ಶಿವಪಂಚಾಕ್ಷರಿಮಂತ್ರ ಉಪದೇಶಿಸಿ ಪರ್ವತದ ಬುಡದಲ್ಲಿರುವ ಪ್ರಸ್ತುತ ಕಿಗ್ಗ ಎಂದು ಕರೆಯಲ್ಪಡುವ ಸ್ಥಳದಲ್ಲಿ ಚಂದ್ರಮೌಳೇಶ್ವರರನ್ನು ಕುರಿತು ತಪಸ್ಸನ್ನಾಚರಿಸಲು ಆದೇಶಿಸುತ್ತಾರೆ ಅದರಂತೆ ಪತ್ನಿ ಸಮೇತರಾಗಿ ಪುನಃ ತಪಸ್ಸು ಮಾಡುತ್ತಾರೆ, ಪರಮಾತ್ಮನಾದ ಪರಶಿವನ ದರ್ಶನದಿಂದ ಅತ್ಯಂತ ಸಂತೋಷ ಉಂಟಾದ ಅವಸರದಲ್ಲಿ  ವರ ಬೇಡುವಾಗ ವಿಚಲಿತರಾದ ಖುಷ್ಯಶೃಂಗರು ನಾನು ನಿನ್ನಲ್ಲಿ ಐಕ್ಯವಾಗಬೇಕು ಎಂಬ ವರದ ಬದಲಾಗಿ 
 ನೀನು ನನ್ನಲ್ಲಿ ಐಕ್ಯನಾಗು ಎಂಬ ಕೋರಿಕೆಯಂತೆ ಚಂದ್ರಮೌಳೇಶ್ವರರು ಈ ಮಹಾಮಹಿಮನಲ್ಲಿ ಐಕ್ಯಗೊಳ್ಳುತ್ತಾರೆ, ವರ ಕೋರಿಕೆಯಲ್ಲಿ ಉಂಟಾದ ಮಾತಿನ ವ್ಯತ್ಯಾಸದಿಂದಾಗಿ ಈ ಪ್ರದೇಶ ಕಗ್ಗ ಎಂಬ ಚುನುನೊಂದಿಗೆ ಗುರುತಿಸಿಕೊಂಡು ಕಾಲಾನುಕ್ರಮದಲ್ಲಿ ಕಿಗ್ಗ ಎಂದು ಕರೆಯಲ್ಪಟ್ಟಿತೆಂದು ನಂಬಲಾಗುತ್ತದೆ. 

ಈ  ಹಿನ್ನೆಲೆಯಂತೆ ಮಳೆ ಬೆಳೆ ಹಾಗೂ ಸಂತಾನ ಪ್ರಾಪ್ತಿಗಾಗಿ ಶ್ರೀ ಋಷ್ಯಶೃಂಗೇಶ್ವರಸ್ವಾಮಿ ದೇವರಲ್ಲಿ ಪ್ರಾರ್ಥಿಸಿಕೊಂಡಾಗ ಇಷ್ಟಾರ್ಥ ಸಿದ್ದಿಸುವುದೆಂಬ ನಂಬಿಕೆಯಿಂದ ಇಂದದಿಗೂ ಊರಿನ ಮತ್ತು ಪರ ಊರಿನ ಭಕ್ತಜನರೆಲ್ಲ ಭಕ್ತಿಯಿಂ ಶ್ರೀ ಸನ್ನಿಧಿಯಲ್ಲಿ ಸೇವೆಯನ್ನು ನಡೆಸಿಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳತ್ತಿದ್ದಾರೆ.



custom banner
pressmailtoday
Chethana Muniswamygo

Creator

ಹಿಮಾಚಲ ಪ್ರದೇಶದ ಶೃಂಗ ಋಷಿ ದೈವಸ್ಥಾನ:-
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ್ ತೆಹಸಿಲ್‌ನಲ್ಲಿ 'ಚೆಹ್ನಿ ಕೋಟೆ' ಎಂಬ ಹೆಸರಿನಲ್ಲಿ ಋಷ್ಯಶೃಂಗನ ದೇವಾಲಯವಿದೆ. ಮೂರು ಅಂತಸ್ತಿನ ಪಗೋಡಾ ಶೈಲಿಯ ದೇವಾಲಯವು ಸುತ್ತಮುತ್ತಲಿನ ಪ್ರಾಚೀನ ಭೂದೃಶ್ಯದ ಅದ್ಭುತ ನೋಟಗಳನ್ನು ನೀಡುತ್ತದೆ.

ದೇವಾಲಯದ ಒಳಾಂಗಣವು ಸಂಪೂರ್ಣವಾಗಿ ಮರದ ಕೆತ್ತನೆಗಳು ಮತ್ತು ವಾಸ್ತುಶಿಲ್ಪದಿಂದ ಮಾಡಲ್ಪಟ್ಟಿದೆ. ಶೃಂಗ ಋಷಿ ಮತ್ತು ಶಾಂತಾ ದೇವಿಯ ದೇವತೆಗಳನ್ನು ದೇವಾಲಯದ ಮೇಲಿನ ಮಹಡಿಯಲ್ಲಿ ಇರಿಸಲಾಗಿದೆ. ದೇವತೆಗಳು ಈ ಸ್ಥಳವನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತಾರೆ ಮತ್ತು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ ಎಂದು ಸ್ಥಳೀಯರು ಬಲವಾಗಿ ನಂಬುತ್ತಾರೆ.ಇಲ್ಲಿನ
ಬಂಜಾರ್ ಕಣಿವೆಯಲ್ಲಿ, ಋಷ್ಯಶೃಂಗನನ್ನು ಸ್ಥಳೀಯರು "ಶೃಂಗ ಋಷಿ" ಎಂದು ಕರೆಯುತ್ತಾರೆ.

https://youtube.com/shorts/z9h5TY680y0?si=x9KZn9Nqnr5E35L3

#rishi #Sringeri_

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

487 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

*ಪ್ರಾಚೀನ ಶೃಂಗ ಋಷಿ ದೇವಾಲಯ*- ರೇತಸ್ಸನ್ನು ಸೇವಿಸಿ ಗರ್ಭಧರಿಸಿದ ಜಿಂಕೆ*

*ಪ್ರಾಚೀನ ಶೃಂಗ ಋಷಿ ದೇವಾಲಯ*- ರೇತಸ್ಸನ್ನು ಸೇವಿಸಿ ಗರ್ಭಧರಿಸಿದ ಜಿಂಕೆ*

17 views 0 likes 0 comments


Style
More
Like
List
Comment

Prev
Next

Full
Exit
0
0
Prev
Next