Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

ಶ್ರೀಪಾದರಾಜರು

ಶ್ರೀಪಾದರಾಜರು

Jun 11, 2025

*ಶ್ರೀ ಶ್ರೀಪಾದರಾಜರು


ಶ್ರಿಯುತರು ಆಕಾಶದಲ್ಲಿ ಕಂಡುಬರುವ ದ್ರುವ ನಕ್ಷತ್ರದ ಸ್ವರೂಪವೇ ಆಗಿದ್ದಾರೆ. ಕರ್ನಾಟಕ ರಾಜ್ಯದ 
ಮುಳಬಾಗಿಲುನಲ್ಲಿ   ಶ್ರೀ ಪಾದರಾಜ ಮಠ  ಇದೆ, ಇಲ್ಲಿ. ಪ್ರತಿ ವರ್ಷ  ಶ್ರೀ ಶ್ರೀಪಾದರಾಜರ ಆರಾಧನಾ ಮಹೋತ್ಸವ ನಡೆಯುತ್ತದೆ.


ರಾಜ್ಯದ ಪೂರ್ವ ಭಾಗದಲ್ಲಿ ಇರುವ 
ಮುಳಬಾಗಿಲು ಸ್ಥಳವು  ಭೂವೈಕುಂಠ ಅಥವಾ ತಿರುಪತಿ ಕ್ಷೇತ್ರದ ಪೂರ್ವ ದಿಕ್ಕಿನ ದ್ವಾರವಾಗಿದ್ದರಿಂದ ಅದು `ಮೂಡಲಬಾಗಿಲು’ ಅಥವಾ `ಮುಳಬಾಗಿಲು’ ಎಂದು ಪ್ರಸಿದ್ಧವಾಗಿದೆ. 

ದೇವರ  ದರುಶನ ಪಡೆಯಲೆಂದು ಇಲ್ಲಿಗೆ ಬರುವ ಅನೇಕ ಭಕ್ತರ ಪಾಲಿಗೆ ಈ ಸನ್ನಿಧಾನದ ಪ್ರಶಾಂತ ವಾತಾವರಣವು ಶಾಂತಿ ಮತ್ತು ಸಂತೃಪ್ತಿಯ ಚಿಲುಮೆಯಾಗಿದೆ. 
ಶ್ರೀ ಮಠದ ಪೀಠಾಧಿಪತಿ ಯಾಗಿ ಭಕ್ತರ ಉದ್ದಾರ ಮಾಡಿದರು,‌ಶ್ರೀಪಾದರಾಜರು ಇಳಿವಯಸ್ಸಿನಲ್ಲಿದ್ದಾಗಲೊಮ್ಮೆ ಅವರಿಗೆ ಗಂಗಾಸ್ನಾನದ ಬಯಕೆಯಾಯಿತು. ಆದರೆ ಅಷ್ಟು ದೂರ ಪ್ರಯಾಣಿಸುವಷ್ಟು ಸುಸ್ಥಿರ ದೇಹಸ್ಥಿತಿಯಲ್ಲಿ ಅವರಿರಲಿಲ್ಲ.

  ಅವರ ಸ್ಮರಣೆಯ ಕಾರಣದಿಂದಲೇ 
ಆಗ ಸ್ವತಃ ಗಂಗೆಯೇ ಅವರಿಗೆ ಕಾಣಿಸಿಕೊಂಡು, ತಾನೇ ನರಸಿಂಹ ತೀರ್ಥಕ್ಕೆ ಬರುವುದಾಗಿ ವಾಗ್ದಾನವಿತ್ತಳು.

 ಅಂದಿನಿಂದ ಇಂದಿನವರೆಗೆ, ನರಸಿಂಹ ತೀರ್ಥದಲ್ಲಿ ಸ್ನಾನ ಮಾಡುವುದು ಗಂಗಾಸ್ನಾನಕ್ಕೆ ಸಮ ಎಂದು ಪರಿಗಣಿಸಲಾಗುತ್ತದೆ.

ಶ್ರೀಪಾದರಾಜರು ತಮ್ಮ ಮಹಾನ್‌ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ಮತ್ತು ಇತರ ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾ ಭಂಡಾರದ ಪಿತಾಮಹರೆಂದೇ ಪ್ರಖ್ಯಾತರಾದರು. ಆದ್ದರಿಂದಲೇ ಅವರ ಕಾಲವನ್ನು ಭಾರತೀಯ ಜ್ಞಾನ ಪರಂಪರೆಯ ಸುವರ್ಣಯುಗವೆಂದು ಕರೆಯುತ್ತಾರೆ.

ಶ್ರೀಪಾದರಾಜರು ವೃಂದಾವನ ಪ್ರವೇಶಿಸಿದ್ದು ಕ್ರಿ.ಶ.1504ರಲ್ಲಿ. ಇಂದಿಗೂ ಅವರ  ಭಕ್ತರು ಮನಃಪೂರ್ವಕವಾಗಿ ಅವರ ವೃಂದಾವನಕ್ಕೆ ಸೇವೆ ಸಲ್ಲಿಸುತ್ತಾರೆ, ಅವರು ಅಷ್ಟೇ ನಿಜ ಭಕ್ತರ ಪವಿತ್ರ ಬೇಡಿಕೆಗಳನ್ನು ಈಡೇರಿಸುತ್ತಾರೆ.

#ಪಾದರಾಜ #ಪಂಚರತ್ನಮಾಲಿಕ #Sri #Sripadaraja #ಕೀರ್ತನಕಾರರ #ಕಿರುಪರಿಚಯ #ಕನ್ನಡವ್ಯಾಕರಣ #SriPadharajaMutt #SanyasaSweekara  #Peetarohana  #Teertha #Mulbagal.



https://youtube.com/shorts/pV7uWdPPKiA?si=vqrs_bOzlmPEMKAw

custom banner
pressmailtoday
Chethana Muniswamygo

Creator

ಶ್ರೀಪಾದರಾಜರು ತಮ್ಮ ಮಹಾನ್‌ ಕೃತಿಗಳು, ಕೀರ್ತನೆಗಳು, ಸುಳಾದಿಗಳು, ದಂಡಕಗಳು ಮತ್ತು ಇತರ ಕನ್ನಡ ಗ್ರಂಥಗಳಿಂದಾಗಿ ಹರಿದಾಸ ವಿದ್ಯಾ ಭಂಡಾರದ ಪಿತಾಮಹರೆಂದೇ ಪ್ರಖ್ಯಾತರಾದರು. ಆದ್ದರಿಂದಲೇ ಅವರ ಕಾಲವನ್ನು ಭಾರತೀಯ ಜ್ಞಾನ ಪರಂಪರೆಯ ಸುವರ್ಣಯುಗವೆಂದು ಕರೆಯುತ್ತಾರೆ

#_ #INDIAN_ #Karnataka_

Comments (0)

See all
Add a comment

Recommendation for you

  • Invisible Bonds

    Recommendation

    Invisible Bonds

    LGBTQ+ 2.5k likes

  • What Makes a Monster

    Recommendation

    What Makes a Monster

    BL 77.2k likes

  • Secunda

    Recommendation

    Secunda

    Romance Fantasy 43.5k likes

  • Blood Moon

    Recommendation

    Blood Moon

    BL 47.9k likes

  • For the Light

    Recommendation

    For the Light

    GL 19.1k likes

  • Invisible Boy

    Recommendation

    Invisible Boy

    LGBTQ+ 11.6k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

811 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

34 episodes

ಶ್ರೀಪಾದರಾಜರು

ಶ್ರೀಪಾದರಾಜರು

26 views 0 likes 0 comments


Style
More
Like
List
Comment

Prev
Next

Full
Exit
0
0
Prev
Next