Please note that Tapas no longer supports Internet Explorer.
We recommend upgrading to the latest Microsoft Edge, Google Chrome, or Firefox.
Home
Comics
Novels
Community
Mature
More
Help Discord Forums Newsfeed Contact Merch Shop
Publish
Home
Comics
Novels
Community
Mature
More
Help Discord Forums Newsfeed Contact Merch Shop
__anonymous__
__anonymous__
0
  • Publish
  • Ink shop
  • Redeem code
  • Settings
  • Log out

ಸನಾತನ ಸಂಸ್ಕೃತಿ

ವಿಜಯದಾಸಾರ್ಯ ವಿರಚಿತ* *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ

ವಿಜಯದಾಸಾರ್ಯ ವಿರಚಿತ* *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ

Jun 26, 2025

ವಿಜಯದಾಸಾರ್ಯ ವಿರಚಿತ* *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ 

*ಕದರಿ ಮಹಾತ್ಮೆ * 

*ರಾಗ ಸಿಂಧುಭೈರವಿ* 

*ಧ್ರುವತಾಳ* 

ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ |
ನಗದ ಪ್ರದೇಶ ಇದರ ಅಗಲಾ ಸುತ್ತ ಯೋಜನ |
ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ |
ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು |
ಅಗಣಿತದಲ್ಲಿ ಭಕ್ತಗೆ ತಂದು ಕೊಡುವದೂ |
ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ |
ಖಗರಾಜಾನಿಲ್ಲಿ ತಪಸಿಗನಾಗಿ ಕೃಷ್ಣನ |
ಹೆಗಲಲ್ಲಿ ಪೊತ್ತು ತಿರಗುವ ವರವನ್ನು ಪಡೆದು |
ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭಾ ನರ - |
ಮೃಗರೂಪ *ವಿಜಯವಿಠ್ಠಲಾ* ಕದರಿನಿವಾಸ |
ಬಗೆಬಗೆಯಿಂದ ಚನ್ನಿಗನಾಗಿ ಮೆರೆವ ॥ 1 ॥

*ಮಟ್ಟತಾಳ* 

ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ |
ಅಹಿತ ದಿತಿಸುತನ ಆವಹದೊಳು ಕೊಂದು |
ಸಾಹಸವುಳ್ಳ ಸುರರ ದಾಹನ ಮಾಡುವೆನೆಂದು |
ಅಹೋಬಲದಿಂದ ಈ ಮಹಿಯೊಳಗೆ ಸ್ತೋತ್ರ |
ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿ
ಖಳರ ಕೊಂದೂ ಗಹಗಹಿಸಲು 
ವಾರಿರುಹ ಭವಬಂದು ಬಿನ್ನಾಹ ಮಾಡುತಿರಲು ಬಹು ಮಹಿಮನಾದ *ವಿಜಯವಿಠ್ಠಲರೇಯಾ* |
ಮಹ ಸಂತೋಷದಲಿ ಬಾಹುಬಲದಿ ಮೆರೆದಾ ॥ 2 ॥

*ತ್ರಿವಿಡಿತಾಳ* 

ಈ ತೆರದಲಿ ಇಲ್ಲಿ ನರಹರಿ ಇರುತಿರೆ |
ಶ್ವೇತ ಮುನೇಶ್ವರ ಬಂದು ವೇಗ |
ತಾ ತಪವನೆ ಮಾಡಿ ಚಿತ್ತ ನಿರ್ಮಳದಲ್ಲಿ |
ಖ್ಯಾತ ಪಡೆದ ವರವಿನಿಂದ |
ಭೂತಳದೊಳಗಿದ್ದು ಅಂದಾರಭ್ಯವಾಗಿ |
ಶ್ವೇತಾರಣ್ಯ ಕಾಣೊ ನಾಮದಲ್ಲೀ |
ಭೀತಿಯಿಂದಲಿ ಭೃಗುನು ಇಲ್ಲಿ ತಪವನೆ ಮಾಡಿ |
ಪಾತಕ ಪರಿಹಾರ ಮಾಡಿಕೊಂಡ |
ಶ್ವೇತವಾಹನನಂದು ಯಾತ್ರಿ ಮಾಡುವಾಗ |
ನೀತಿಯಿಂದಲಿ ಇಲ್ಲೆ ಶುದ್ಧನಾದ |
ಭೂತಾಧಿಪನೆ ಬಲ್ಲ ಇದರ ಮಹಿಮೆಯನ್ನು |
ಪ್ರೀತಿಯಿಂದಲಿ ನಾರದಗರುಹಿದ |
ಮಾತುಳವೈರಿ ಸಿರಿ *ವಿಜಯವಿಠ್ಠಲ* ಮಾಂ - |
ಧಾತಾನಿಂದಲಿ ಪೂಜೆಗೊಂಡು ವರವನಿತ್ತ ॥ 3 ॥

*ಅಟ್ಟತಾಳ* 

ಶ್ವೇತ ಪುಷ್ಕರಣಿಯು ಭವನಾಶಿ ಭೃಗುತೀರ್ಥ |
ಶ್ವೇತವಾಹನ ವಶಿಷ್ಟ ನಾರದತೀರ್ಥ |
ಧಾತಾ ನರಸಿಂಗ ಇಂದ್ರಾದ್ಯಷ್ಟತೀರ್ಥ |
ಪಾತಕಹರ ಋಣಮೋಚನತೀರ್ಥ ಮ - |
ಹಾತಿಶಯವುಳ್ಳ ರಾಮ ಶಂಖಾಚಕ್ರ |
ಶ್ವೇತ ನಾನಾ ಚಂದ್ರ ಸೂರ್ಯತೀರ್ಥ |
ಅಷ್ಟೋತ್ತರ ತೀರ್ಥಗಳಲ್ಲಿ ಉಂಟು ಶು - |
ದ್ಧಾತುಮಾ ಬಂದೊಂದು ಮಜ್ಜನಮಾಡಲು |
ಜ್ಞಾತಿಗಳ ಕೂಡ ಸದ್ಗತಿ ಐದುವ |
ವಾತಾವಿನುತ ಸ್ವಾಮಿ *ವಿಜಯವಿಠ್ಠಲರೇಯಾ* |
ಮಾತೂಮಾತಿಗೆ ನೆನಿಸೆ ಒಲಿದು ಸಂಗಡ ಬಪ್ಪ ॥ 4 ॥

*ಆದಿತಾಳ* 

ಅರ್ಜುನ ನದಿಯಲ್ಲಿ ಸಜ್ಜನರ ಕೂಡ |
ಮಜ್ಜನವನ್ನು ಮಾಡಿ ಹೆಜ್ಜಿಹೆಜ್ಜಿಗೆ ನಿ - |
ರ್ಲಜ್ಯರಾಗಿ ಹರಿಯಾ ಗರ್ಜನೆಯಲಿ ನುಡಿದು |
ಮೂರ್ಜಗದೊಳು ಬಲು ಪೂಜ್ಯವಂತರಾಗಿ |
ಅರ್ಜುನ ಮರದೆಡಿಯಾ ಇಪ್ಪ *ವಿಜಯವಿಠ್ಠಲ* |
ನಿರ್ಜರಾಗಣದೊಡನೆ ಪಾಲಿಸುವಾ ಫಲವರಿತು ॥ 5 ॥

*ಜತೆ* 

ಖಾದ್ರಿ ಪುರಾನಿಲಯಾ ನರಶಿಂಗಾ ಭವಭಂಗ |
ಭದ್ರಾ ಮೂರುತಿ ಜನಾರ್ದನ *ವಿಜಯವಿಠ್ಠಲಾ* 


ನರಸಿಂಹ ಸುಳಾದಿ 

ನರಸಿಂಹ ವಜ್ರಸಿಂಹ
ಸರಸಿಜನಾಭಾ ದಕ್ಷಿಣ ಶರಾಧಿನಿವಾಸಾ ll ಪ ll

ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಹೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು 
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ll 1 ll

ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟುತಿರೆ
ಪಗಲಿರುಳು ಒಂದೆಂದರು ಸಕಲರು
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ll 2 ll

 ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠಲ ಮಹದಾ ll 3 ll

ಗುರುಗಳೇ

ಶ್ರುತಿತತಿಗೆ ದೂರ ಉನ್ನತಲೀಲ ಸಾಕಾರ ।
ಸತತ ಭಕ್ತರಾಧಾರ ಅಪ್ರಾಕೃತಶರೀರ ॥
ಯತಿಗಳ ಮನೋಹರ ಮತಿಗೆ ಅಗೋಚರ ।
ಪತಿತಪಾವನ ಸಿರಿಪತಿ *ವಿಜಯವಿಠ್ಠಲನ* ॥ 3 ॥


#ಸಾಗಿಬಾರಯ್ಯ #ಭವರೋಗದ #ವೈದ್ಯನೆ _ ,_ಶ್ರೀ #ವಿಜಯದಾಸರರಚನೆ , _#ರಾಗ #ಸಾವೇರಿ , #ಆದಿತಾಳ #mp3
 #fda #sda #clark #sad #dd #ad #jd #Working #Department #information 

_ ಸಾಗಿಬಾರಯ್ಯ ಭವರೋಗದ ವೈದ್ಯನೆ _ ,_ಶ್ರೀ ವಿಜಯದಾಸರ ರಚನೆ , _ರಾಗ ಸಾವೇರಿ , ಆದಿತಾಳ.mp3

https://youtu.be/c82yrqPDe6w?si=xvlbbhmb9PJUIKg1


custom banner
pressmailtoday
Chethana Muniswamygo

Creator

ವಿಜಯದಾಸಾರ್ಯ ವಿರಚಿತ* *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ

#_ #Karnataka_

Comments (0)

See all
Add a comment

Recommendation for you

  • What Makes a Monster

    Recommendation

    What Makes a Monster

    BL 76.3k likes

  • Arna (GL)

    Recommendation

    Arna (GL)

    Fantasy 5.5k likes

  • Blood Moon

    Recommendation

    Blood Moon

    BL 47.9k likes

  • Earthwitch (The Voidgod Ascendency Book 1)

    Recommendation

    Earthwitch (The Voidgod Ascendency Book 1)

    Fantasy 3k likes

  • The Last Story

    Recommendation

    The Last Story

    GL 46 likes

  • The Sum of our Parts

    Recommendation

    The Sum of our Parts

    BL 8.7k likes

  • feeling lucky

    Feeling lucky

    Random series you may like

ಸನಾತನ ಸಂಸ್ಕೃತಿ
ಸನಾತನ ಸಂಸ್ಕೃತಿ

478 views0 subscribers

*ಬ್ರಹ್ಮನು ಸೃಷ್ಟಿಯ ದೇವರ ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ*

ಬ್ರಹ್ಮ ನು ಸೃಷ್ಟಿಯ ದೇವರು (ದೇವ) ಮತ್ತು ತ್ರಿಮೂರ್ತಿಗಳಲ್ಲಿ ಒಬ್ಬ, ಉಳಿದವರು ವಿಷ್ಣು ಮತ್ತು ಶಿವ ದೇವರು.

ವೇದಾಂತ, ಪುರಾಣ , ತತ್ತ್ವಶಾಸ್ತ್ರದಲ್ಲಿ ಬ್ರಹ್ಮನ್ ಎಂದು ಕರೆಯಲ್ಪಡುವ ಪರಮಾತ್ಮನು ಅವನ ಪತ್ನಿ ಸರಸ್ವತಿ, ಈಕೆ ಕಲಿಕೆಯ ದೇವತೆ. ಬ್ರಹ್ಮನನ್ನು ಹೆಚ್ಚಾಗಿ ವೈದಿಕ ದೇವತೆಯಾದ ಪ್ರಜಾಪತಿಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾನೆ..
#bramma #brammanandam #saraswatichandra #saraswati #sharadmalhotra #sharada #hinduism #jainstatus #jainsong

ಸೃಷ್ಟಿಯ ಪ್ರಕ್ರಿಯೆಯ ಆರಂಭದಲ್ಲಿ, ಬ್ರಹ್ಮನು ಹನ್ನೊಂದು ಸೃಷ್ಟಿಸಿದ ಪ್ರಜಾಪತಿಗಳನ್ನು ಮಾನವ ಜನಾಂಗದ ಪಿತಾಮಹರು ಎಂದು ನಂಬಲಾಗಿದೆ. ಬ್ರಹ್ಮನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದು ಕರೆಯಲಾಗುತ್ತದೆ.

ಈತ ತ್ರಿಮೂರ್ತಿಗಳ ಮೂಲಭೂತ ಸದಸ್ಯ, ಇದರಲ್ಲಿ ವಿಷ್ಣು, ಸಂರಕ್ಷಕ ಮತ್ತು ಶಿವ, ವಿನಾಶಕ ಕೂಡ ಸೇರಿದ್ದಾರೆ. ಒಟ್ಟಾಗಿ, ಈ ಮೂರು ದೇವತೆಗಳು ಕ್ರಮವಾಗಿ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಕಾರ್ಯಗಳನ್ನು ಪ್ರತಿನಿಧಿಸುತ್ತವೆ,.

ಸೃಷ್ಟಿಕರ್ತನಾಗಿ ಬ್ರಹ್ಮನ ಪಾತ್ರವು ಭವ್ಯ ಯೋಜನೆಯಲ್ಲಿ ಅವನ ಮಹತ್ವವನ್ನು ಒತ್ತಿಹೇಳುತ್ತದೆ.
ಬ್ರಹ್ಮನ ದೈವಿಕ ವಾಹನ ಅಥವಾ ವಾಹನವು ಹಂಸ ಎಂದು ಕರೆಯಲ್ಪಡುವ ಪವಿತ್ರ ಹೆಬ್ಬಾತು. ದೇವರುಗಳು ಮತ್ತು ಮನುಷ್ಯರಿಗೆ ಮಾತ್ರವಲ್ಲದೆ ಅಸುರರು ಎಂದು ಕರೆಯಲ್ಪಡುವ ರಾಕ್ಷಸರಂತಹ ಜೀವಿಗಳಿಗೂ ಹಲವಾರು ಆಶೀರ್ವಾದಗಳನ್ನು ನೀಡುವ ಅಸಾಧಾರಣ ಸಾಮರ್ಥ್ಯವನ್ನು ಅವನು ಹೊಂದಿದ್ದಾನೆ. ಕುತೂಹಲಕಾರಿಯಾಗಿ, ರಾಕ್ಷಸರು ಸಹ ಅವನ ದೈವಿಕ ದೇಹದ ವಿವಿಧ ಭಾಗಗಳಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ವಿವರಿಸಲು, ರಾಕ್ಷಸ ಜನಾಂಗವನ್ನು ಬ್ರಹ್ಮನ ಪಾದದಿಂದಲೇ ಅಸ್ತಿತ್ವಕ್ಕೆ ತರಲಾಗಿದೆ ಎಂದು ನಂಬಲಾಗಿದೆ.

ಮನುಸ್ಮೃತಿ ಗ್ರಂಥವು ಇವರನ್ನು ಮರಿಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತುಜ, ವಶಿಷ್ಠ, ಪ್ರಸೇತರು ಅಥವಾ ದಕ್ಷ, ಭೃಗು ಮತ್ತು ನಾರದರ ಜನಿಕರು ಎಂದು ಪಟ್ಟಿ ಮಾಡುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಲು ಅವನಿಗೆ ಸಹಾಯ ಮಾಡಲು ಅವನು ಏಳು ಮಹಾನ್ ಋಷಿಗಳನ್ನು ಅಥವಾ ಸಪ್ತಋಷಿಗಳನ್ನು ಸೃಷ್ಟಿಸಿದನು , ಅವನ ಈ ಎಲ್ಲಾ ಪುತ್ರರು ಬ್ರಹ್ಮನ ದೇಹದಿಂದಲ್ಲ, ಅವನ ಮನಸ್ಸಿನಿಂದ ಜನಿಸಿದ ಕಾರಣ, ಅವರನ್ನು ಮಾನಸ ಪುತ್ರರು ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಬ್ರಹ್ಮನು ಬ್ರಹ್ಮಾಂಡದ ಆರಂಭದಲ್ಲಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಹೂವಿನಲ್ಲಿ (ತಾಯಿಯಿಲ್ಲದೆ) ಸ್ವಯಂ-ಜನನ ಮಾಡಿದ್ದಾನೆ. ಇದು ಅವನ ಹೆಸರನ್ನು ನಭಿಜ (ನಾಭಿಯಿಂದ ಜನಿಸಿದ) ಎಂದು ವಿವರಿಸುತ್ತದೆ. ನೀರಿನಲ್ಲಿ ಜನಿಸಿದ ಬ್ರಹ್ಮನನ್ನು ಕಂಜ (ನೀರಿನಲ್ಲಿ ಜನಿಸಿದ) ಎಂದೂ ಕರೆಯುತ್ತಾರೆ.

Subscribe

32 episodes

ವಿಜಯದಾಸಾರ್ಯ ವಿರಚಿತ*   *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ

ವಿಜಯದಾಸಾರ್ಯ ವಿರಚಿತ* *ಕದರಿ ಮಹಾತ್ಮೆ ಮತ್ತು ಇತರೆ ಸುಳಾದಿ

16 views 0 likes 0 comments


Style
More
Like
List
Comment

Prev
Next

Full
Exit
0
0
Prev
Next